Slide
Slide
Slide
previous arrow
next arrow

ಮೆಸೇಜ್ ಮುಖಾಂತರ ಸಮಸ್ಯೆ ತಿಳಿಸಿ: ಜಿಲ್ಲಾಧಿಕಾರಿ

300x250 AD

ಮುಂಡಗೋಡ: ನಾನು ಎಲ್ಲ ತಾಲೂಕಿಗೆ ಅಲ್ಪಕಾಲದ ಭೇಟಿನೀಡಿ ಅಲ್ಲಿಯ ಸಮಸ್ಯೆಗಳ ಕುರಿತು ಆಯಾ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸುವ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಂರ್ಯೋನ್ಮುಖವಾಗಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಅವರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯಾ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆಯಾ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಪರಿಚಯ ಹಾಗೂ ನನ್ನ ಪರಿಚಯ ಮಾಡಿಕೊಳ್ಳಲು ಹಾಗೂ ಆಯಾ ಇಲಾಖೆಯ ಮಾಹಿತಿ ಪಡೆದು ಅಲ್ಲಿಯ ನ್ಯೂನ್ಯತೆ ಏನಿದೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಕಾರ್ಯಮಾಡುವದು ಹೇಗೆ ಎಂದು ಸಲಹೆ-ಸೂಚನೆ ನೀಡುವದೊಸ್ಕರ ಜಿಲ್ಲೆಯ ಎಲ್ಲ ತಾಲೂಕಗಳಿಗೆ ಅಲ್ಪಕಾಲದ ಭೇಟಿ ನೀಡುತ್ತಿದ್ದೇನೆ. ಮುಂದಿನ 10 ದಿನಗಳ ನಂತರ ಮತ್ತೆ ತಾಲೂಕಿಗೆ ಭೇಟಿ ನೀಡುತ್ತೇನೆ ಎಂದರು.

ಸಾರ್ವಜನಿಕರು ತಮ್ಮ ಕಚೇರಿಯ ನೇರ ಸಂಪರ್ಕ ಹೊಂದಿ ತಮ್ಮ ಸ್ಥಳಿಯ ಸಮಸ್ಯೆಗಳನ್ನು ಮೆಸೇಜ ಮುಖಾಂತರ ತಿಳಿಸಿದರೆ ಅದನ್ನು ಪರಿಹರಿಸುವ ಕ್ರಮಕೈಗೊಳ್ಳಲಾಗುವುದು ,ಬೆಳೆ ಪರಿಹಾರವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

300x250 AD

ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬೀನ ಮಹಾಪತ್ರಾ ಹಾಗೂ ತಹಶೀಲ್ದಾರ ಶಂಕರ ಗೌಡಿ ಇದ್ದರು.

Share This
300x250 AD
300x250 AD
300x250 AD
Back to top